ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1991ರ ಲೋಕಸಭೆ ಚುನಾವಣೆ ಸಂದರ್ಭ ಪಟ್ನಾದ ಪಾಂಡರಕ್ ಮತಗಟ್ಟೆ ಬಳಿ ಸಿತಾರಾಮ್ ಸಿಂಗ್ ಎಂಬುವವರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ನಿತೀಶ್ ಕುಮಾರ್ ಸಹ ಆರೋಪಿಯಾಗಿದ್ದಾರೆ. ಶಾಸನಸಭೆ ಚುನಾವಣೆಗೆ ಅಫಿಡವಿಟ್ ಸಲ್ಲಿಸುವ ಸಂದರ್ಭದಲ್ಲಿ ಈ ವಿಷಯವನ್ನು ನಿತೀಶ್ ಕುಮಾರ್ ಉಲ್ಲೇಖಿಸಿದ್ದರು. 2009ರಲ್ಲಿ ಬಾರ್ಹ್ನಲ್ಲಿರುವ ವಿಚಾರಣಾ ನ್ಯಾಯಾಲಯ ನಿತೀಶ್ ವಿರುದ್ಧದ ಆರೋಪದ ವಿಚಾರಣೆ ಕೈಗೆತ್ತಿಕೊಂಡಿತ್ತು. ಪ್ರಕರಣ ಸದ್ಯ ಪಟ್ನಾ ಹೈಕೋರ್ಟ್ನಲ್ಲಿದೆ. ಈ ವಿಷಯ ಮುನ್ನೆಲೆಗೆ ಬರುವುದರಿಂದ ತಪ್ಪಿಸಿಕೊಳ್ಳಲು ಮತ್ತು ಖುಲಾಸೆಯಾಗುವ ಸಲುವಾಗಿ ಪ್ರಯತ್ನ ನಡೆಸಲು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮೇಲಿನ ಭ್ರಷ್ಟಾಚಾರ ಆರೋಪವನ್ನೇ ನಿತೀಶ್ ದೊಡ್ಡದು ಮಾಡಿದ್ದಾರೆ. ಎನ್ಡಿಎ ಜತೆ ಕೈಜೋಡಿಸಿದ್ದಾರೆ’ ಎಂದು ಲಾಲೂ ಆರೋಪಿಸಿದ್ದಾರೆ.