ಪ್ರತಿಯೊಂದು ವಿಷಯಕ್ಕೂ ರಾಜಕೀಯ ಬಣ್ಣ ಬಳಿಯುವುದು ಈಗ ಸಾಮಾನ್ಯವಾಗಿದೆ. ಭಾರತದ ರಾಜಕಾರಣ ನೈತಿಕ ಮೌಲ್ಯಗಳಿಂದ ವಿಮುಖವಾಗುತ್ತಿದೆ ಎಂದೆನಿಸುತ್ತದೆ. ‘ಕ್ವಿಟ್ ಇಂಡಿಯಾ’ ಚಳವಳಿಯ 75ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ‘ನವಭಾರತ ನಿರ್ಮಾಣ’ದ ಕರೆ ನೀಡಿದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪರೋಕ್ಷವಾಗಿ ಆರ್ಎಸ್ಎಸ್ ಮತ್ತು ಇತರ ಸಂಘಟನೆಗಳ ಬಗ್ಗೆ ಕಿಡಿಕಾರಿದ್ದು ಇದಕ್ಕೆ ಇನ್ನೊಂದು ನಿದರ್ಶನ. ನಮ್ಮ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ಹೋರಾಟದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ.