ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ನಿರಾಸೆ

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬರ್ಲಿನ್‌: ಭಾರತದ ಸ್ಪರ್ಧಿಗಳು ವಿಶ್ವಕಪ್‌ ಆರ್ಚರಿಯಲ್ಲಿ ಒಂದೂ ಪದಕ ಗೆಲ್ಲದೆ ನಿರಾಸೆ ಅನುಭವಿಸಿದ್ದಾರೆ. ಕಂಪೌಂಡ್ ವಿಭಾಗದಲ್ಲಿ ಪುರುಷರ ತಂಡ ಜರ್ಮನಿ ಎದುರು ಸೋಲು ಕಂಡು ಮೂರನೇ ಸ್ಥಾನ ಪಡೆಯುವ ಅವಕಾಶ ಕಳೆದುಕೊಂಡಿತು.

ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಭಾರತ ತಂಡ 225–227 ಪಾಯಿಂಟ್ಸ್‌ಗಳ ಅಂತರದಲ್ಲಿ ಐದನೇ ಶ್ರೇಯಾಂಕದ ಜರ್ಮನಿ ಎದುರು ನಿರಾಸೆ ಅನುಭವಿಸಿತು. ತಂಡದಲ್ಲಿ ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ಅಮನ್‌ಜಿತ್ ಸಿಂಗ್ ಇದ್ದರು.

ಈ ವರ್ಷದ ಅಂತಿಮ ಹಂತದ ಆರ್ಚರಿ ವಿಶ್ವಕಪ್ ಇದಾಗಿದ್ದು, ಭಾರತದ ಸ್ಪರ್ಧಿಗಳು ಒಂದೂ ಪದಕ ಗೆಲ್ಲದೆ ತವರಿಗೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT