ಹೊಸಪೇಟೆ: ರೋಹಿತ್ ಶಂಕರ್ ಮತ್ತು ತೃಪ್ತಿ ಪುರೋಹಿತ್ ಅವರು ನಗರದಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಕೆಡೆಟ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರೋಹಿತ್ 11–1, 11–6, 11–8ರಲ್ಲಿ ಹೃಷಿಕೇಶ್ ಶತಲೂರು ಮೇಲೂ, ಬಾಲಕಿಯರ ವಿಭಾಗದಲ್ಲಿ ತೃಪ್ತಿ ಪುರೋಹಿತ್ 11–5, 11–4, 11–8ರಲ್ಲಿ ಪಿ.ಎಂ. ಶ್ವೇತಾ ವಿರುದ್ಧವೂ ಗೆಲುವು ಸಾಧಿಸಿದರು.
ಈ ನಾಲ್ಕೂ ಜನ ಸ್ಪರ್ಧಿಗಳು ಬೆಂಗಳೂರಿನವರು. ಮೂರು ದಿನ ಟೂರ್ನಿ ನಡೆಯಲಿದ್ದು ಭಾನುವಾರ 15 ವರ್ಷದ ಒಳಗಿನವರ ಬಾಲಕ ಮತ್ತು ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ ಪಂದ್ಯಗಳು ಜರುಗಲಿವೆ.