ನವದೆಹಲಿ, ಆ. 31– ಸಂಪುಟದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಐಕ್ಯಮತ್ಯದ ತುರ್ತು ಅಗತ್ಯವನ್ನು ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು, ಸಂಪುಟದಲ್ಲಿ ಒಡಕುಂಟಾಗಿದೆಯೆಂಬ ಭಾವನೆ ದೇಶದಲ್ಲಿ ಬೆಳೆಯುತ್ತಿರುವು ದನ್ನು ಪ್ರಸ್ತಾಪಿಸಿ, ಸಹೋದ್ಯೋಗಿಗಳು ಸಮಸ್ಯೆಗಳನ್ನು ಕುರಿತು ಬಿಚ್ಚು ಮನಸ್ಸಿನ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ಕೇಳಿದರೆಂದು ವರದಿಯಾಗಿದೆ.