‘ಸಂಜಿ ಅಡುಗೆ ಮಾಡಿ ಇನ್ನೇನು ಊಟ ಮಾಡಬೇಕು ಅನ್ನುವಾಗ ಮಳೆರಾಯ ಗುಡುಗು, ಸಿಡಿಲು ಸಮೇತ ಅರ್ಭಟಿಸಿದ, ನಮ್ಮ ಮನ್ಯಾಗಿನ ಅಡುಗೆ, 4 ಚೀಲ ಜೋಳ, ಗೋಧಿ, ಅಕ್ಕಿ, ಹಾಸಿಗೆ ಹೊದಿಕೆ ತೇಲಿ ಹೋದವು, ಮನೆಯನ್ನು ಸ್ವಚ್ಛಗೊಳಿಸಿದೆ, ಉಟ್ಟ ಬಟ್ಟೆ ಮೇಲ ಅದೇವಿ, ಯಾರು ನಮ್ಮ ಕಷ್ಟ ಕೇಳುತ್ತಿಲ್ಲ ಎಂದು ನೊಂದ ಸೈನಾಜ್ ಮಿರ್ಜಿ ಪ್ರಜಾವಾಣಿಗೆ ತಮ್ಮ ಅಳನ್ನು ತೋಡಿಕೊಂಡರು. ಮಳೆಯಿಂದ ಆವಾಂತರ ಆಗಿದ್ದರೂ ಯಾವ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲಿ ಬಂದಿಲ್ಲ ಎಂದು ಹುಸೇನಸಾಬ ಮಿರ್ಜಿ ಅಸಮಾದಾನ ವ್ಯಕ್ತಪಡಿಸಿದರು.