ಚಿಕ್ಕಬಳ್ಳಾಪುರ: ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ಶನಿವಾರ ಅದ್ದೂರಿಯಾಗಿ ನಡೆದ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ತಾಣವಾದ ‘ರಂಗಸ್ಥಳ’ ಸ್ತಬ್ಧಚಿತ್ರದ ರೂಪದಲ್ಲಿ ಮಿಂಚಿತು.
ಜಿಲ್ಲಾಡಳಿತವು ಈ ಸ್ತಬ್ಧಚಿತ್ರದ ನಿರ್ಮಾಣದ ಹೊಣೆಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರಿಗೆ ವಹಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ತಬ್ಧಚಿತ್ರ ಸಿದ್ಧಗೊಂಡಿತ್ತು. ಬೃಹತ್ ದ್ವಾರ ಬಾಗಿಲು, ಹೆಡೆ ಬಿಚ್ಚಿದ ಆದಿಶೇಷನ ಮಡಿಲಲ್ಲಿ ಮಲಗಿದ ರಂಗನಾಥ ಸ್ವಾಮಿಯ ಮೂರ್ತಿಯನ್ನು ಸ್ತಬ್ಧಚಿತ್ರವನ್ನು ನಿರ್ಮಿಸಲಾಗಿತ್ತು.
ಮೈಸೂರು ದಸರಾ ಮಹೋ ತ್ಸವದಲ್ಲಿ ಶಿಕ್ಷಣ ತಜ್ಞ ಎಚ್. ನರ ಸಿಂಹಯ್ಯ, ಮೇಧಾವಿ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ, ನಂದಿಗಿರಿ ಧಾಮ, ಗೌರಿಬಿದನೂರಿನ
ವಿಧುರಾ ಶ್ವತ್ಥದ ಹುತಾತ್ಮರ ಸ್ತೂಪ ಸ್ತಬ್ಧಚಿತ್ರದ ರೂಪದಲ್ಲಿ ಪ್ರದರ್ಶನಗೊಂಡಿದ್ದವು.