ವಿಮರ್ಶಕ ಟಿ.ಪಿ.ಅಶೋಕ್, ನೀನಾಸಂನ ಅಧ್ಯಕ್ಷ ಶ್ರೀಧರ್ ಭಟ್, ಕೆ.ವಿ.ಅಕ್ಷರ, ಜಸ್ವಂತ್ ಜಾಧವ್, ಇಕ್ಬಾಲ್ ಅಹ್ಮದ್ ಹಾಜರಿದ್ದರು. ಮಧ್ಯಾಹ್ನ ಪುಣೆಯ ಆರತಿ ತಿವಾರಿ ಅವರಿಂದ ‘ಮಂಶಾ ಕೀ ಶಾದಿ’ ಕಿರು ನಾಟಕ ಹಾಗೂ ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ತಿರುಗಾಟ ನಾಟಕ ‘ಮಧ್ಯಮ ವ್ಯಾಯೋಗ’ (ಸಂಸ್ಕೃತ ಮೂಲ: ಭಾಸ. ಕನ್ನಡಕ್ಕೆ: ಎಲ್.ಗುಂಡಪ್ಪ,ನಿರ್ದೇಶನ: ಉಮೇಶ್ ಸಾಲ್ಯಾನ್) ಪ್ರದರ್ಶನಗೊಂಡಿತು.