ಕನ್ನಡಿಗರಿಗೆ ಅನ್ಯಾಯ: ‘ಉತ್ತರ ಕರ್ನಾಟಕದ ಅನೇಕ ಮಂದಿ ಸುಮಾರು 40 ವರ್ಷಗಳಿಂದ ಬೈನಾ ಕಡಲತೀರದಲ್ಲಿ ನೆಲೆಸಿ, ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ ಗೋವಾ ಸರ್ಕಾರ 2004ರಿಂದ ಹಂತ ಹಂತವಾಗಿ ಇಲ್ಲಿನ ಕನ್ನಡಿಗರ ಮನೆಗಳನ್ನು ತೆರವುಗೊಳಿಸುವ ಮೂಲಕ ಅನ್ಯಾಯ ಮಾಡಿದೆ. ನಿರಾಶ್ರಿತರಿಗೆ ಪುನವರ್ಸತಿಯನ್ನು ಕಲ್ಪಿಸದೇ ಬೀದಿಗೆ ದೂಡಿದೆ’ ಎಂದು ಚಿಂಚನಸೂರ ಕಿಡಿಕಾರಿದರು.