‘ಆಂಧ್ರಪ್ರದೇಶದ ಚಿತ್ತೂರಿನ ನಂದೀಶ್ವರಿ, ತರಕಾರಿ ಹಾಗೂ ಹೂವು ಮಾರಾಟ ಮಾಡಲು ನಗರಕ್ಕೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಅವರ ಬಳಿ ಬಂದಿದ್ದ ವ್ಯಕ್ತಿಯೊಬ್ಬ, ₹2,000 ಮುಖಬೆಲೆಯ 6 ಜೆರಾಕ್ಸ್ ನೋಟುಗಳನ್ನು ಕೊಟ್ಟು ಚಿಲ್ಲರೆ ಕೊಡುವಂತೆ ಕೇಳಿದ್ದ. ಗ್ರಾಹಕರು ಹೆಚ್ಚಿದ್ದರಿಂದ ನೋಟು ಪರೀಕ್ಷಿಸಲು ಮರೆತ ನಂದೀಶ್ವರಿ, ಆತನಿಗೆ ಚಿಲ್ಲರೆ ಕೊಟ್ಟಿದ್ದರು. ಬಳಿಕ ಆ ವ್ಯಕ್ತಿ ಅಲ್ಲಿಂದ ಹೊರಟು ಹೋಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.