ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯ ಭೇಟಿಗಾಗಿ ಪೆರೊಲ್‌ಗೆ ಅರ್ಜಿ ಸಲ್ಲಿಸಿದ ಶಶಿಕಲಾ

Last Updated 2 ಅಕ್ಟೋಬರ್ 2017, 13:02 IST
ಅಕ್ಷರ ಗಾತ್ರ

ಚೆನ್ನೈ: ಅನಾರೋಗ್ಯದಿಂದ ನರಳುತ್ತಿರುವ ಪತಿ ಎಂ. ನಟರಾಜನ್‌ ಅವರ ಭೇಟಿಗಾಗಿ, 15 ದಿನಗಳ ಕಾಲ ಜೈಲಿನಿಂದ ಹೊರಗಿರಲು ಅನುಮತಿ ಕೋರಿ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ. ಕೆ. ಶಶಿಕಲಾ ಅವರು ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪಕ್ಷದ ಬಂಡಾಯ ಶಾಸಕ ಹಾಗೂ ಮುಖಂಡ ಟಿ. ಟಿ. ವಿ ದಿನಕರನ್‌ ಹೇಳಿದ್ದಾರೆ.

ಯಕೃತ್ತು ಸಮಸ್ಯೆ ಎದುರಿಸುತ್ತಿರುವ ನಟರಾಜನ್‌ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಕೃತ್ತು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ದಿನಕರನ್‌ ಅವರು ತಿಳಿಸಿದ್ದಾರೆ.

‘ಶಶಿಕಲಾ ಅವರಿಗೆ ಪೆರೋಲ್‌ ಸಿಗುವ ಬಗ್ಗೆ ನಂಬಿಕೆ ಇದೆ. ಜೈಲಿನಿಂದ ಹೊರಗಿರಲು ಎಷ್ಟು ದಿನಗಳವರೆಗೆ ಅನುಮತಿ ನೀಡಬೇಕೆಂಬುದನ್ನು ಬಂಧೀಖಾನೆ ಇಲಾಖೆ (ಕರ್ನಾಟಕ) ನಿರ್ಧರಿಸಲಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT