'ಹಲವು ಕಥೆಗಳನ್ನು ಕೇಳಿಸಿಕೊಂಡಿದ್ದರೂ ಅವುಗಳನ್ನು ಮನಸ್ಸು ಒಪ್ಪಿಕೊಂಡಿರಲಿಲ್ಲ. ಈ ಸಿನಿಮಾದ ಕಥೆ ಕೇಳಿದಾಗ ಮನಸ್ಸು ಥ್ರಿಲ್ ಆಯಿತು. ನನ್ನ ವಯಸ್ಸಿಗೆ ತಕ್ಕಂತಹ ಪಾತ್ರವೊಂದನ್ನು ಈ ಸಿನಿಮಾದಲ್ಲಿ ನಿಭಾಯಿಸುತ್ತಿದ್ದೇನೆ' ಎಂದು ಹೇಳಿದರು ಜಗ್ಗೇಶ್. ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆಯಂತೆ. 'ಜಪಾನಿ ಸಿನಿಮಾ ಒಂದರಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲು ಮುಂದಾಗಿದ್ದೇನೆ' ಎಂದು ಹೇಳಿದವರು ನಿರ್ದೇಶಕ ಹರಿಕೃಷ್ಣ. ನಾರಾಯಣಸ್ವಾಮಿ, ಇನ್ಫ್ಯಾಂಟ್ ಪ್ರದೀಪ್ ಮತ್ತು ಸಲೀಂ ಷಾ ಅವರು ಈ ಚಿತ್ರಕ್ಕಾಗಿ ಹಣ ಹೂಡಿಕೆ ಮಾಡುತ್ತಿದ್ದಾರಂತೆ.