ಮೌಢ್ಯ ವಿರೋಧಿ ಮಸೂದೆಯನ್ನು ನವೆಂಬರ್ನಲ್ಲಿ ಶಾಸನ ರೂಪಕ್ಕೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸಂತಸದ ವಿಷಯ. ಹಾಗೆಯೇ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಉಜ್ಜಯನಿಯ ಮರುಳಸಿದ್ಧೇಶ್ವರ ಜಾತ್ರೆಯಲ್ಲಿ ಗೋಪುರ ಶಿಖರಕ್ಕೆ ತೈಲ ಎರೆಯುವ ಪದ್ಧತಿಯೂ ನಿಲ್ಲಬೇಕು. ಇದರಿಂದ ಕೋಟ್ಯಂತರ ರೂಪಾಯಿಗಳ ತೈಲ ವ್ಯರ್ಥವಾಗುತ್ತದೆ. ಅಲ್ಲದೇ ಶಿಖರದ ಅತ್ಯದ್ಭುತ ಶಿಲ್ಪ ಕಲಾಕೃತಿಗಳು ಮೇಣ ಹಿಡಿದು ಕಾಣದಂತಾಗಿವೆ.