ಭಾನುವಾರ ಸಂಜೆಯೇ ಜಯಶ್ರೀ ಅವರು ತಮ್ಮ ಜಮೀನಿನಲ್ಲಿರುವ ಬಾವಿಗೆ ಹಾರಿದ್ದರು. ನೀರಿನಲ್ಲಿ ಶವ ತೇಲುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಡರಾತ್ರಿಯೇ ಜಯಶ್ರೀ ಅವರ ಶವ ಹೊರತೆಗೆಯಲಾಯಿತು. ಬಾವಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಮಕ್ಕಳ ಶವ ಹೊರ ತೆಗೆಯಲು ಆಗಿರಲಿಲ್ಲ. ಸೋಮವಾರ ಬೆಳಿಗ್ಗೆ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಾಚರಣೆ ನಡೆಸಿ, ಪಂಪ್ಸೆಟ್ ಬಳಸಿ ಬಾವಿಯ ನೀರನ್ನೆಲ್ಲ ಖಾಲಿ ಮಾಡಿ ಉಳಿದವರ ಮೃತದೇಹಗಳನ್ನು ಹೊರತೆಗೆದರು. ಮಕ್ಕಳ ಶವಗಳನ್ನು ಟ್ರಾಕ್ಟರ್ನಲ್ಲಿ ಗ್ರಾಮಕ್ಕೆ ತಂದಾಗ ಕುಟುಂಬದವರ ಆಕ್ರಂದನ ಮುಗಿಲುಮಟ್ಟಿತ್ತು.