ರಾಯಪುರ/ ನವದೆಹಲಿ: ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರ ಮಗ ಆದಿತ್ಯ ನಾರಾಯಣ್ ಅವರು ರಾಯಪುರದ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೆಚ್ಚಿನ ಲಗೇಜ್ಗೆ ₹ 13 ಸಾವಿರ ಪಾವತಿ ಮಾಡುವಂತೆ ಕೇಳಿದ್ದಕ್ಕೆ ಆದಿತ್ಯ ಸಿಬ್ಬಂದಿಯನ್ನು ನಿಂದಿಸಿದ್ದಾರೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಕ, ನಟ ಹಾಗೂ ಟಿ.ವಿ ಕಾರ್ಯಕ್ರಮ ನಿರೂಪಕ ಆದಿತ್ಯ ಅವರು ರಾಯಪುರದಿಂದ ಮುಂಬೈಗೆ ತೆರಳಲು ಭಾನುವಾರ ಬೆಳಿಗ್ಗೆ ನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.