ಮಳೆಗಾಲವೆಂದರೆ, ಮೌನ ತಾಳಿದ್ದ ನದಿಗಳಲ್ಲಿ ಜುಳು ಜುಳು ನಾದ ಹೊಮ್ಮುವ ಸಮಯ. ಇದು ಕರ್ನಾಟಕದ ಪಶ್ಚಿಮ ಘಟ್ಟಗಳ ಸೊಬಗನ್ನು ಇಮ್ಮಡಿಗೊಳಿಸುವ ಕಾಲವೂ ಹೌದು. ಲೆಕ್ಕವಿಲ್ಲದಷ್ಟು ಜಲಪಾತಗಳನ್ನು ತನ್ನೊಡಲಲ್ಲಿ ಪೊರೆಯುವ ಪಶ್ಚಿಮಘಟ್ಟದಲ್ಲಿ, ತನ್ನ ಸೌಂದರ್ಯದಿಂದಲೇ ಸೆಳೆಯುವ ಮತ್ತೂ ಒಂದು ಜಲಪಾತವಿದೆ. ಅದೇ ಸಿರಿಮನೆ.