ವದ್ದಟ್ಟಿ: ಇಲ್ಲಿಗೆ ಸಮೀಪದ ವದ್ದಟ್ಟಿ ಗ್ರಾಮದಲ್ಲಿ 4ನೇ ಅಂಗನವಾಡಿ ಕೇಂದ್ರದಲ್ಲಿ ‘ಮಾತೃಪೂರ್ಣ ಯೋಜನೆ’ ಸೋಮವಾರ ಚಾಲನೆ ನೀಡಲಾಯಿತು. ಬಳಿಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರವನ್ನು ಕಾರ್ಯಕರ್ತೆಯರು ವಿತರಿಸಿದರು. ಯೋಜನೆಯ ಜಾಗೃತಿಗಾಗಿ ಭಾನುವಾರ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಕಾರ್ಯಕರ್ತೆಯರಾದ ಎನ್.ಎಸ್. ಮೌನೇಶ್ವರಿ, ಎಸ್. ರುದ್ರಮ್ಮ, ಕೆ. ರಿಂದಮ್ಮ, ಕೆ.ಅಶ್ವಿನಿ ಇದ್ದರು.