‘ವೋಟಿಗಾಗಿ ನೋಟು ತೆಗೆದುಕೊಂಡರೆ ಮೆಣಸಿನಕಾಯಿ ತಿಂದಾಗ ಬಾಯಿ ಉರಿಯುವ ರೀತಿ ಐದು ವರ್ಷಗಳ ಕಾಲ ನಾವು ಒದ್ದಾಡಬೇಕಾಗುತ್ತದೆ. ಹಣ ಪಡೆಯದೆ ಒಳ್ಳೆಯ ವ್ಯಕ್ತಿಗೆ ಮತ ಹಾಕಿದರೆ ಅದರಿಂದ ನಮ್ಮ ಸಮಾಜ ಬಾಳೆ ಹಣ್ಣು ತಿಂದಷ್ಟು ಸಿಹಿಯಾಗಿರುತ್ತದೆ. ಅದಕ್ಕಾಗಿ ನಾವು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು. ಕರವೇ ಕಾರ್ಯಕರ್ತರಾದ ನಂದಿ ಪುರುಷೋತ್ತಮ್, ದೇವರಾಜ್, ನಯಾಜ್, ಮುಬಾರಕ್, ಶಶಿಕುಮಾರ್ ಹಾಜರಿದ್ದರು.