ಗಾಂಧಿ ಜಯಂತಿ ಅಂಗವಾಗಿ ಆಕ್ಸ್ ಫರ್ಡ್ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಸ್ವಚ್ಛತೆ ಎಂಬುದು ಊಟ, ತಿಂಡಿ, ನಿದ್ರೆಯಂತೆ ದೈನಂದಿನ ಕೆಲಸಗಳಲ್ಲಿ ಒಂದಾಗಬೇಕು. ಮನೆಯೊಳಗೆ ಕಸ ಬಿದ್ದಿದ್ದರೂ, ಅಮ್ಮನೇ ಗುಡಿಸಿ ಸ್ವಚ್ಛಗೊಳಿಸಬೇಕು ಎಂಬ ಮನೋಭಾವ ಬಿಡಬೇಕು. ನಡೆದಾಡುವಾಗ ಕಣ್ಣಿಗೆ ಕಾಣಿಸುವ ಕಸವನ್ನು ಎತ್ತಿ ಕಸ ಸಂಗ್ರಹದ ಡಬ್ಬಿಯೊಳಗೆ ಹಾಕಬೇಕು. ಈ ರೀತಿ ಜಾಗೃತಿ ಮೂಡಿದಾಗ ಮಾತ್ರ ಪರಿಸರ ಸ್ವಚ್ಛಗೊಳಿಸಲು ಸಾಧ್ಯ ಎಂದರು.