ಹಾವೇರಿ: ‘ಸಮಾಜ ಸೇವಕರಂತೆ ನಟಿಸುತ್ತಾ ಅಧಿಕಾರಿ, ಸಿಬ್ಬಂದಿಗೆ ಬೆದರಿಕೆ ಹಾಕುವವರ ಹಾವಳಿ ಹಾವೇರಿಯಲ್ಲಿ ಹೆಚ್ಚಾಗಿದೆ’ ಎಂದು ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ದೂರಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸ್ ಠಾಣೆಯಲ್ಲಿ ಈಚೆಗೆ ನಾಗೇಂದ್ರನಮಟ್ಟಿಯ ಚಂದ್ರು ಗೋವಿಂದಪ್ಪ ಅರೆಪಲ್ಲೆ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
‘ಅವಾಚ್ಯ ಪದಗಳಿಂದ ನಿಂದನೆ, ಕೆಲಸ ಮಾಡದಿದ್ದರೆ ವರ್ಗಾವಣೆ ಮಾಡಿಸುತ್ತೇನೆ ಎಂಬಿತ್ಯಾದಿ ಬೆದರಿಕೆ ಹಾಕಿದ್ದಾನೆ’ ಎಂದು ಮಹಿಳಾ ಸಿಬ್ಬಂದಿ ದೂರು ನೀಡಿರುವುದಾಗಿ ಪೊಲೀಸರು ದೃಢ ಪಡಿಸಿದ್ದಾರೆ.
‘ರಾಜಕೀಯ ಪ್ರಭಾವ ಬಳಸಿಕೊಂಡು ಒತ್ತಡ ಹೇರುವವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.