ಕಳೆದ 10 ದಿನಗಳಿಂದ ತಾಲ್ಲೂಕಿನಾದ್ಯಂತ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ತೊಗರಿ ಬೆಳೆಗೆ ಮಳೆ ಪೂರಕವಾಗಿದೆ. ಇದರಿಂದ ಟೊಂಗೆಗಳು ಒಡೆದು ಕವಲಾಗುತ್ತಿವೆ. ತಾಲ್ಲೂಕಿನ ರಂಜೋಳ, ಹಾಬಾಳ (ಟಿ), ಕೋಡ್ಲಾ, ಮುಧೋಳ, ಮಳಖೇಡ, ಹಂದರಕಿ, ಆಡಕಿ, ಮದನಾ, ಮೀನಹಾಬಾಳ, ನೀಲಹಳ್ಳಿ, ಊಡಗಿ ಸೇರಿದಂತೆ ವಿವಿಧೆಡೆಗಳಲ್ಲಿ ತೊಗರಿ ಬೆಳೆ ಚೆನ್ನಾಗಿದೆ. ಅಕಾಲಿಕ ಮಳೆಯಿಂದ ಮುಂಗಾರು ಬೆಳೆಗಳಲ್ಲಿ ಕಡಿಮೆ ಇಳುವರಿ ಪಡೆದ ರೈತ, ತೊಗರಿ ಬೆಳೆಯಲ್ಲಿ ಅಧಿಕ ಲಾಭವನ್ನು ಪಡೆದುಕೊಳ್ಳಲು ತಯಾರಿ ನಡೆಸಿದ್ದಾನೆ.