ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಗಾಂಧಿ ಬದುಕಿದ್ದರೆ, ನಿಜಕ್ಕೂ ನೋವು ಅನುಭವಿಸುತ್ತಿದ್ದರು. ಅಂತಹ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ. ದೇಶಕ್ಕಾಗಿ ದುಡಿದ ಗಾಂಧಿ, ತಮ್ಮದೆಲ್ಲವನ್ನೂ ತ್ಯಾಗ ಮಾಡುವ ಮೂಲಕ ವಿಶ್ವಮಾನ್ಯರಾಗಿ ಉಳಿದರು. ಅವರ ಆದರ್ಶ ತತ್ವಗಳನ್ನು ನಾವು ಮರೆತು, ಇದೀಗ ಸಾಮಾಜಿಕ ದುರಂತಗಳಿಗೆ ಕಾರಣವಾಗುತ್ತಿದ್ದೇವೆ. ಗಾಂಧಿ ಕಂಡ ರಾಮರಾಜ್ಯದ ಕನಸು ಮತ್ತೆ ಜೀವಂತಿಕೆ ಪಡೆದುಕೊಳ್ಳಬೇಕಾದರೆ ಯುವಜನತೆ ಗಾಂಧಿ ಮಾರ್ಗ ಅನುಸರಿಸಿ ಹೆಜ್ಜೆ ಇಡಬೇಕಾಗಿದೆ ಎಂದರು.