ಮೂರು ದಿನಗಳಿಂದ ಕೇರಳ ಪ್ರವಾಸದಲ್ಲಿರುವ ಅಮಿತ್ ಷಾ ಮಂಗಳವಾರ ನಾಲ್ಕು ಕಿಲೋ ಮೀಟರ್ ಯಾತ್ರೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು, ‘ಪಶ್ಚಿಮ ಬಂಗಾಳ ಮತ್ತು ತ್ರಿಪುರಾದ ಪರಿಸ್ಥಿತಿಯನ್ನು ಗಮನಿಸಿ. ಕಮ್ಯೂನಿಸ್ಟರು ಇಲ್ಲಿ ಆಡಳಿತ ನಡೆಸುತ್ತಿದ್ದಾರೆ. ಶಾಂತಿಯಿಂದಿದ್ದ ಕೇರಳ ಹಿಂಸಾಚಾರಕ್ಕೆ ತಿರುಗುತ್ತಿದೆ. ಕಮ್ಯೂನಿಸ್ಟ್ ಸಿದ್ಧಾಂತವನ್ನು ಇಲ್ಲಿ ಹರಡಲಾಗುತ್ತಿದೆ’ ಎಂದು ಹೇಳಿದರು. ಷಾ ಅವರು ಗುರುವಾರ ಮತ್ತೆ ಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ.