ಚಿತ್ರದ ನಿರ್ಮಾಪಕ ಮುಖೇಶ್ ಮೆಹ್ತಾ ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ’ಧ್ರುವ ವಿಕ್ರಮ್ ನಾಯಕನಾಗಿ ’ಅರ್ಜುನ ರೆಡ್ಡಿ’ಯಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ಪ್ರೇಮಕಥೆಯನ್ನು ಹೊಂದಿರುವ ‘ಅರ್ಜುನ ರೆಡ್ಡಿ’ ಆಧುನಿಕ ದೇವದಾಸನನ್ನು ಚಿತ್ರಿಸುವಂತಿದೆ.