ಬಿಜೆಪಿಯು ಕೇರಳದಲ್ಲಿ ಆರಂಭಿಸಿರುವ ‘ಜನ ರಕ್ಷಾ ಯಾತ್ರೆ’ಯಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಬುಧವಾರ ಕೇರಳಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಿಪಿಎಂ, ‘ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕು ಎಂಬುದನ್ನು ಕೇರಳ ಸರ್ಕಾರವನ್ನು ನೋಡಿ ಕಲಿಯಲಿ. ಅದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳಿದೆ.