‘ಕಳೆದ ಬಾರಿಯೇ ಅರ್ಜುನನನ್ನು ಮುನ್ನಡೆಸಲು ಅವಕಾಶ ಸಿಗುತ್ತಿತ್ತು. ಆದರೆ ಅರ್ಜುನನ ಜೊತೆ ಒಡನಾಟ ಇರಲಿಲ್ಲ ಎಂದು ನಾನೇ ಸುಮ್ಮನಿದ್ದೆ. ದಲಿತ ಎಂಬ ಕಾರಣಕ್ಕೆ ಈ ಬಾರಿ ಅವಕಾಶ ತಪ್ಪಿಸಲು ಹಲವರು ಪ್ರಯತ್ನಿಸಿದ್ದರು. ಇದರಿಂದ ತುಂಬ ನೋವುಂಟಾಯಿತು’ ಎಂದು ಹೇಳಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಯಾವ ರೀತಿ ಮುಂದುವರಿಯುತ್ತಿದೆ, ಸಂವಿಧಾನ ಜಾರಿಯಾಗಿ 67 ವರ್ಷ ಕಳೆದರೂ ಯಾವ ರೀತಿ ಭೇದ ಭಾವ ಇದೆ ಎಂಬುದಕ್ಕೆ ಇವರ ಮಾತುಗಳು ನಿದರ್ಶನ.