‘ಕಿದ್ವಾಯಿ ಸಂಸ್ಥೆಯ ನಿರ್ದೇಶಕರಾಗಿದ್ದ ಎಂ. ವಿಜಯಕುಮಾರ್ ವಿರುದ್ಧ ನಿಯಮ ಬಾಹಿರವಾಗಿ ಉಪಕರಣಗಳ ಖರೀದಿ, ಸಿವಿಲ್ ಕಾಮಗಾರಿ ಕೈಗೊಂಡಿರುವ ಮತ್ತು ನೇಮಕಾತಿ ಮಾಡಿಕೊಂಡಿರುವ ಆರೋಪ ಇದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತ ದಳ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಳ್ಳುವ ಮುನ್ನವೇ ಅವರು ಸ್ವಯಂ ನಿವೃತ್ತಿ ಪಡೆಯಲು ಶರಣ ಪ್ರಕಾಶ ಪಾಟೀಲ ಅನುಮತಿ ನೀಡಿದ್ದಾರೆ’ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ಆರ್. ವಿನಯಕುಮಾರ್ ಎಂಬುವರು ದೂರು ನೀಡಿದ್ದರು.