ಬಳ್ಳಾರಿ: ‘ಹರಪನಹಳ್ಳಿ ಕ್ಷೇತ್ರದಲ್ಲಿ ಜೀವನಪೂರ್ತಿ ಸೇವೆ ಸಲ್ಲಿಸಲು ಬದ್ಧ’ ಎಂದು ಬಿಜೆಪಿ ಮುಖಂಡ ಜಿ.ಕರುಣಾಕರರೆಡ್ಡಿ ಹೇಳಿದರು. ನಗರದ ತಮ್ಮ ಮನೆಯಲ್ಲಿ ಮಂಗಳವಾರ ಕ್ಷೇತ್ರದ ಉಪ್ಪಾರ ಸಮುದಾಯದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ವಿವಿಧ ಸಮುದಾಯಗಳ ಸುಮಾರು ಹನ್ನೆರಡು ಸಾವಿರ ಮಂದಿ ಮನೆಗೆ ಬಂದು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಅವರೆಲ್ಲರ ಬೆಂಬಲ ಪಡೆದಿರುವುದು ಧನ್ಯತೆ ಮೂಡಿಸಿದೆ’ ಎಂದರು.