ಪುಣೆ: 2017 ನೇ ಸಾಲಿನ ಭೌತಶಾಸ್ತ್ರದಲ್ಲಿ ನೊಬಲ್ ಪ್ರಶಸ್ತಿ ಪಡೆದ ಗುರುತ್ವ ತರಂಗಗಳ ಅಧ್ಯಯನ ಕುರಿತ ಸಂಶೋಧನಾ ಲೇಖನಕ್ಕೆ ಮೂವರು ವಿಜ್ಞಾನಿಗಳು ನೊಬಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಶೋಧನೆಯಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಇರುವುದು ಹೆಮ್ಮೆಯ ಸಂಗತಿಯಾಗಿದೆ.
ಹೌದು ಈ ಅಧ್ಯಯನ ಲೇಖನದಲ್ಲಿ ಪೂನೆ ಮೂಲದ (ಐಯುಸಿಎಎ)ನ ಪ್ರಾಧ್ಯಾಪಕರಾಗಿರುವ ಸಂಜೀವ್ ಧುರಂಧರ್ ಅವರನ್ನೊಳಗೊಂಡ 37 ಭಾರತೀಯ ವಿಜ್ಞಾನಿಗಳು ಸಹ ಲೇಖಕರಾಗಿದ್ದಾರೆ.
ಅಲ್ಲದೆ ಧುರಂಧರ್ ಅವರ ತಂಡ ಸತತ 30 ವರ್ಷಗಳಿಂದ ‘ಶಬ್ದದಿಂದ ಸಂಕೇತವನ್ನು ಹೊರತೆಗೆಯುವಿಕೆಯ ಮೂಲಕ ಗುರುತ್ವ ತರಂಗಗಳ ಪತ್ತೆ ‘ ಎಂಬ ವಿಷಯದ ಮೇಲೆ ಅಧ್ಯಯನ ಮಾಡಿದೆ.