ಹಾಸನ: ಒಂಟಿ ಮಹಿಳೆ ಕೊಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಶ್ಯಾಮ್ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಬಿ.ಚೋಳೇನಹಳ್ಳಿಯ ಮನು, ಮಂಜ, ಸುನಿಲ್, ಬೆಂಗಳೂರಿನ ಹೊಸಕೇರಹಳ್ಳಿಯ ಮಂಜ ಶಿಕ್ಷಿತರು.
ಅಪರಾಧಿಗಳಿಗೆ ತಲಾ ₹75 ಸಾವಿರ ದಂಡ ವಿಧಿಸಲಾಗಿದೆ.
2013ರ ಸೆ.30ರಂದು ಚಿನ್ನಹೊನ್ನೇನಹಳ್ಳಿಯ ಮನೆಗೆ ನುಗ್ಗಿ ತೇಜಸ್ವಿನಿ ಎಂಬುವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದರು.
ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಸರ್ಕಾರದ ಪರವಾಗಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.