‘ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲ್ಲೂಕಿನ ಭೀಮಾ ತೀರದ ಕೆಲ ರೌಡಿಗಳು, ಮಧ್ಯಪ್ರದೇಶದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಜತೆ ನಂಟು ಹೊಂದಿದ್ದಾರೆ. ಸದ್ಯ ಅವರೊಂದಿಗೆ ಸಂಪರ್ಕದಲ್ಲೂ ಇದ್ದಾರೆ. ಭೀಮಾ ತೀರದಲ್ಲಿ ಹಲವು ಸುಪಾರಿ ಕಿಲ್ಲರ್ಗಳೂ ಇದ್ದಾರೆ. ಇದರ ಜತೆಗೆ ಹಂತಕ ತಂಡಗಳು ಸಹ ಎರಡು ದಶಕದಿಂದ ತಮ್ಮದೇ ಪ್ರಾಬಲ್ಯ ಹೊಂದಿದ್ದು, ಆಗಾಗ್ಗೆ ಕೊಲೆ ಎಸಗುತ್ತಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಎಸ್ಐಟಿ ಅಧಿಕಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಗೌರಿ ಹತ್ಯೆಗೂ, ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ವ್ಯಕ್ತಿಗಳಿಗೂ ಸಂಬಂಧವಿದೆಯೇ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.