‘ಠಾಣೆ ವ್ಯಾಪ್ತಿಯ ಬಾರೊಂದರಲ್ಲಿ ನಿಗದಿತ ಅವಧಿ ಮುಗಿದರೂ ವ್ಯಾಪಾರ ನಡೆಯುತ್ತಿತ್ತು. ಅಲ್ಲಿಗೆ ಹೋಗಿದ್ದ ಇನ್ಸ್ಪೆಕ್ಟರ್ ಹಾಗೂ ಮುಖ್ಯ ಕಾನ್ಸ್ಟೆಬಲ್, ಮೂವರನ್ನು ಹಿಡಿದುಕೊಂಡು ಬಂದು ರಾತ್ರಿಯಿಡಿ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಅವರನ್ನು ಬಿಡಿಸಿಕೊಳ್ಳಲು ಬೆಳಿಗ್ಗೆ ಬಾರ್ ಮಾಲೀಕರು ಠಾಣೆಗೆ ಬಂದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಂದ ದೂರಿನನ್ವಯ ಪ್ರಾಥಮಿಕ ತನಿಖೆ ನಡೆಸಿ, ಅವರಿಬ್ಬರನ್ನು ಅಮಾನತು ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.