‘ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಧರ್ಮಕ್ಕಾಗಿ, ಅದರ ರಕ್ಷಣೆಗಾಗಿ ಹೋರಾಡುವವರಿಗೆ ರಕ್ಷಣೆ ಇಲ್ಲ. ಅಂಥವರಿಗೆ ಆಪತ್ತು ಖಚಿತ. ಧರ್ಮ ರಕ್ಷಣೆಗೆ ನಿಂತವರ ಹತ್ಯೆಯೂ ಆಗಬಹುದು. ಏನಾದರೂ ಆಗಬಹುದು. ಗೋವುಗಳ ರಕ್ಷಣೆಗೆ ನಿಂತವರ ಮೇಲೆ ಆಕ್ರಮಣ ನಡೆಯುತ್ತಿದೆ. ಆಕ್ರಮಣಕಾರರಿಗೆ ಸರ್ಕಾರಿ ಯಂತ್ರವೇ ಪೋಷಕನಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.