‘ಗಣಿ ಗುತ್ತಿಗೆ ಪ್ರದೇಶದಲ್ಲಿಯೇ ಸುಬ್ರಾಯನಹಳ್ಳಿ, ನಂದಿಹಳ್ಳಿ, ಕಾರ್ತಿಕೇಶ್ವರ ಗ್ರಾಮ, ದೇವಗಿರಿ, ಕಮ್ಮತೂರು ಇದೆ. ಇಲ್ಲಿರುವ ಬಹಳಷ್ಟು ಮಂದಿ ಪರಿಶಿಷ್ಟ ಪಂಗಡದವರು. ಆದರೂ ಸಮಿತಿಯು ಇಲ್ಲಿ ಬುಡಕಟ್ಟು ಜನಾಂಗದವರು ವಾಸವಿವಿಲ್ಲ ಎಂದು ನಿರ್ಣಯಿಸಿರುವುದು ಸರಿಯಲ್ಲ’ ಎಂದು ಗ್ರಾಮದ ಮುಖಂಡರಾದ ಮಾಳ್ಗಿ ಪೆನ್ನಪ್ಪ, ದೊಡ್ಡ ಮಾರೆಣ್ಣ, ಮಲ್ಲೇಶಿ, ಸಾರಣ್ಣ, ಮಲ್ಲಿಕಾರ್ಜುನ, ಕುಮಾರಸ್ವಾಮಿ ಪ್ರತಿಪಾದಿಸಿದರು. ಈ ಕುರಿತು ಚರ್ಚಿಸಲು ವಿಶೇಷ ಗ್ರಾಮ ಸಭೆಯನ್ನು ಶೀಘ್ರ ಗ್ರಾಮದಲ್ಲಿ ಏರ್ಪಡಿಸಬೇಕು’ ಎಂದು ಒತ್ತಾಯಿಸಿದರು.