ಹಂಸಭಾವಿ: ‘ಶಾಂತಿ ಮತ್ತು ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು’ ಎಂದು ಮುಖ್ಯ ಶಿಕ್ಷಕ ಎಂ.ಕೆ.ಸುಂಕದ ಹೇಳಿದರು.
ಇಲ್ಲಿನ ಸಮೀಪದ ಲಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ‘ಗಾಂಧಿ ಜಯಂತಿ’ಯಲ್ಲಿ ಅವರು ಮಾತನಾಡಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಾಲತೇಶ ಅಗಸೀಬಾಗಿಲ ಮಾತನಾಡಿ, ‘ಮಾನವೀಯ ಮೌಲ್ಯಗಳು ಇಂದಿನ ಯುವ ಪೀಳಿಗೆಯಲ್ಲಿ ಮಾಯವಾಗುತ್ತಿರುವುದು ವಿಷಾದನೀಯ’ ಎಂದರು.
ಗಾಂಧಿ ಜಯಂತಿ ನಿಮಿತ್ತ ಶಾಲಾ ಮಕ್ಕಳು ಗ್ರಾಮದ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ದಿಳ್ಳೆಪ್ಪ ಜಡಿಯಣ್ಣನವರ, ಮಲ್ಲೇಶಪ್ಪ ಮುದಕಣ್ಣನವರ, ಗ್ರಾಮ ಪಂಚಾಯ್ತಿ ಸದಸ್ಯೆ ಗೌರವ್ವ ಮುದಕಣ್ಣನವರ, ಶಿಕ್ಷಕರಾದ ಆರ್.ಜಿ.ಚಿಕ್ಕಣ್ಣನವರ, ಆರ್.ಎಸ್.ವಾಲಿ, ಸುನೀತಾ ಎನ್.ಕೆ., ಕೆ.ಬಿ.ಕಟ್ಟಿಮನಿ ಹಾಗೂ ಸಂತೋಷ ಪಿ. ಇದ್ದರು.