ವಾಯುಪಡೆ ದಿನಾಚರಣೆಯ ಮುನ್ನಾದಿನವಾದ ಗುರುವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ರೀತಿಯ ಯುದ್ಧಕ್ಕೆ ವಾಯುಸೇನೆ ಸಿದ್ಧವಿದೆ. ಗಡಿಯಲ್ಲಿ ಶತ್ರುಗಳನ್ನು ಗುರುತಿಸುವ ಹಾಗೂ ಅವರನ್ನು ನಿರ್ನಾಮ ಮಾಡುವ ಶಕ್ತಿ ವಾಯುಪಡೆಗಿದೆ’ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.