‘ವೈರ’ ಚಿತ್ರಕ್ಕೆ ಈ ರೀತಿಯ ಪ್ರಮಾಣಪತ್ರ ನೀಡಿರುವುದಕ್ಕೆ ನಟ ಕೃಷ್ಣಮೂರ್ತಿ ಕವತ್ತಾರ್ ಕೂಡ ಬೇಸರ ವ್ಯಕ್ತಪಡಿಸಿದರು. ‘ಈ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳು, ದ್ವಂದ್ವಾರ್ಥದ ಸಂಭಾಷಣೆಗಳು ಇಲ್ಲ. ಆದರೆ ಕೆಲವು ಸೆಕೆಂಡುಗಳ ಕಾಲ ಬೆನ್ನು ತೋರಿಸುವ ದೃಶ್ಯವಿದೆ ಎಂಬ ಕಾರಣಕ್ಕೆ ಎ ಪ್ರಮಾಣಪತ್ರ ನೀಡಲಾಗಿದೆ. ಅವರು ಯಾವ ಪ್ರಮಾಣಪತ್ರ ನೀಡಿದರೂ, ಜನ ನೀಡುವ ಪ್ರಶಂಸೆಯ ಪ್ರಮಾಣಪತ್ರವೇ ನಮಗೆ ಸ್ಫೂರ್ತಿ’ ಎಂದರು ನಿರ್ಮಾಪಕ ಮಂಜುನಾಥ್.