ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ತಕರಾರು: ಪರಸ್ಪರ ಹಲ್ಲೆ, ದೂರು

ಹೆಬ್ರಿಯಲ್ಲಿ ಮನೋರಂಜನಾ ಕೂಟ ಉದ್ಘಾಟನೆ
Last Updated 5 ಅಕ್ಟೋಬರ್ 2017, 10:27 IST
ಅಕ್ಷರ ಗಾತ್ರ

ಬೈಂದೂರು: ರಸ್ತೆಗೆ ಸ್ಥಳ ಬಿಟ್ಟುಕೊಡುವ ಕುರಿತು ಕಾಲ್ತೋಡು ಗ್ರಾಮದ ಎರಡು ಕುಟುಂಬಗಳ ನಡುವಿನ ತಕರಾರಿನ ಕಾರಣ ಪರಸ್ಪರ ಹಲ್ಲೆ ನಡೆಸಿದ ಬಗ್ಗೆ ಪೊಲೀಸರಿಗೆ ಎರಡು ಪ್ರತ್ಯೇಕ ದೂರು ಸಲ್ಲಿಸಲಾಗಿದೆ.

ಅಲ್ಸಾಡಿ ಹರೋರಿಮನೆ ಜ್ಯೋತಿ ಶೆಟ್ಟಿ ಅವರು, ‘ಗೋಪಾಲ ಶೆಟ್ಟಿ, ನಿರಂಜನ ಶೆಟ್ಟಿ, ವಿಜಯ ಶೆಟ್ಟಿ, ಪ್ರಜ್ವಲ ಶೆಟ್ಟಿ ಅವರುಗಳು ನನ್ನ ಮೇಲೆ ಸೋಮವಾರ ಹಲ್ಲೆ ನಡೆಸಿದರು. ಆಗ ಆದ ಎದೆನೋವಿನ ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾದ್ದೇನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಕವಲಾಡಿಮನೆ ಗೋಪಾಲ ಶೆಟ್ಟಿ ನೀಡಿರುವ ದೂರಿನಲ್ಲಿ ದಾರಿ ಬಗ್ಗೆ ನ್ಯಾಯಲಯದ ಖಾಯಂ ಇಂಜಂಕ್ಷನ್ ಇದ್ದರೂ ಜ್ಯೋತಿ ಶೆಟ್ಟಿ ಮತ್ತಿತರರು ದಾರಿಗೆ ತಡೆಯುಂಟು ಮಾಡಿರುವುದರ ಕುರಿತು ಮಾತನಾಡುತ್ತಿದ್ದಾಗ ನನಗೆ ಮತ್ತು ಮಗ ನಿರಂಜನ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಲಾಯಿತು. ಚಿಕಿತ್ಸೆಗೆ ತಾವಿಬ್ಬರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT