ಇದೇ ಸಂದರ್ಭ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಹಾಲು ಮತ ಸಮಾಜದ ಧುರೀಣರಾದ ಎಂ.ಎಚ್.ಹಾಲಣ್ಣವರ, ನಿಂಗಪ್ಪಗೌಡ ಬಪ್ಪರಗಿ, ಮಲಕೇಂದ್ರಗೌಡ ಪಾಟೀಲ, ಡಾ.ಸಿ.ಎಚ್.ನಾಗರಬೆಟ್ಟ, ಕೆಂಚಪ್ಪ ಬಿರಾದಾರ, ಬಿ.ಕೆ.ಬಿರಾದಾರ ಅವರನ್ನು ವೇದಿಕೆಗೆ ಕರೆದು ಮಲ್ಲಾಲಿಂಗಪ್ರಭು ಸ್ವಾಮೀಜಿ ಸಮ್ಮುಖ ನಾವೆಲ್ಲ ಒಗ್ಗಟ್ಟಾಗಿರುತ್ತೇವೆ ಎಂದು ಕೈ ಹಿಡಿದು ಪ್ರಮಾಣ ಮಾಡುವಂತೆ ಮಾಡಿದರು.