ಗ್ರಾಮದ ಆರು ಜನರು ಮಾದಿಗ ಸಮುದಾಯದವರ ಮೇಲೆ ಅನ್ಯ ಸಮಾಜದವರು ಹಲ್ಲೆ ಮಾಡಿದ್ದಾರೆ. ಸುರಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಮಾಡಿದ ಆರೋಪಿಗಳ ಸಂಬಂಧಿಕರು ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಇದರಿಂದ ಅಲ್ಲಿನ ಮಾದಿಗ ಸಮುದಾಯ ಭೀತಿಯಲ್ಲಿ ಕಾಲ ಕಳೆಯುವಂತೆ ಆಗಿದೆ ಎಂದು ಗ್ರಾಮದ ಸಾಮಪ್ಪ, ರಾಮಣ್ಣ, ಹೊಳೆಪ್ಪ, ಬಸಪ್ಪ, ಧರ್ಮಣ್ಣ, ಮಹಾದೇವ, ಮಹಾಲಿಂಗಪ್ಪ, ಭೀಮರಾಯ ಮನವಿ ಮಾಡಿದ್ದಾರೆ.