ನನ್ನದೊಂದು ಪತ್ರಕ್ಕೆ, ಅವರ ‘ಗ್ರಹಿಕೆ ಸರಿಯಲ್ಲ’ ಎಂಬ ಜಿ.ವಿ. ಆನಂದ್ ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ಅನುಮೋದಿಸುತ್ತೇನೆ (ವಾ.ವಾ., ಅ.5). ‘ಹಿಂದೂ ಧರ್ಮ’ ಎಂದರೆ ಬರೀ ವೈದಿಕ ಎನ್ನುವುದು ಈ ದಿವಾಕರನ ಭ್ರಮೆಯಲ್ಲ; ಅದು ಜಿ. ವಿ. ಆನಂದ್ ಅವರ ಪೂರ್ವಗ್ರಹ ಎಂಬುದು ವಿನಯಪೂರ್ವಕ ಅರಿಕೆ! ನಮ್ಮ ಅಂದರೆ ರಾಷ್ಟ್ರ ಸಮುದಾಯದ ಬಹುಸಂಖ್ಯಾತರ ಇರವು, ವೈದಿಕದಿಂದ ಹಿಡಿದು ಆಧುನಿಕ ಸಂವಿಧಾನದವರೆಗೆ ಏಕಸ್ರೋತ ಮತ್ತು ಜೀವಂತ ಎಂಬುದೇ ನನ್ನ ಸ್ಪಷ್ಟ ನಂಬಿಕೆ ಮತ್ತು ಅದನ್ನೇ ಪತ್ರದಲ್ಲಿ ಹೇಳಿರುವುದು.