‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತವನ್ನು ನೋಡಿದ್ದೇನೆ. ನಾನೇ ಸ್ವತಃ ಆಡಳಿತವನ್ನೂ ನಡೆಸಿದ್ದೇನೆ. ಲೋಕಾಯುಕ್ತ ಸ್ಥಾಪನೆ ಆಗಿದ್ದು ನಮ್ಮ ಅವಧಿಯಲ್ಲೇ. ಈಗ ಅದರ ಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಮುಚ್ಚಿ ಭ್ರಷ್ಟಾಚಾರ ಸ್ಥಾಪನೆ ಮಾಡಿದ್ದಾರೆ. ಇದು ಏನು ಕೆಲಸ ಮಾಡುತ್ತಿದೆ ಎಂಬುದೂ ಗೊತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಚರ್ಚೆಯಾಗಬೇಕು’ ಎಂದು ಒತ್ತಾಯಿಸಿದರು.