ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮರಾಂಬ ದೇವಿ ಅದ್ಧೂರಿ ಜಂಬೂ ಸವಾರಿ

Last Updated 6 ಅಕ್ಟೋಬರ್ 2017, 8:23 IST
ಅಕ್ಷರ ಗಾತ್ರ

ಮಸ್ಕಿ: ನವರಾತ್ರಿ ಅಂಗವಾಗಿ ಭ್ರಮರಾಂಬ ದೇವಿಯ ಜಂಬೂ ಸವಾರಿ ಮತ್ತು ಮಹಿಳೆಯರಿಂದ ಕುಂಭ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಅದ್ಧೂರಿಯಾಗಿ ನಡೆಯಿತು. ಬೆಳಿಗ್ಗೆ ಗಂಗಾಸ್ಥಳದಲ್ಲಿ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕುಂಭ ಹಾಗೂ ಜಂಬೂ ಸವಾರಿ ಮೆರವಣಿಗೆಗೆ ಅಶೋಕ ವೃತ್ತದಲ್ಲಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಮೆರವಣಿಗೆಗೆ ಚಾಲನೆ ನೀಡಿದರು.

ಸಂಡೂರಿನ ಚಂದ್ರಶೇಖರಯ್ಯ ಸ್ವಾಮಿ ವೀರಭದ್ರ ಕುಣಿತ, ಜಮಖಂಡಿಯ ಮಹಾಂತೇಶ ಅವರ ಕರಡಿ ಮಜಲು, ಸಿಂಧನೂರಿನ ಬಸವರಾಜ ನೇತೃತ್ವದ ಮಹಿಳಾ ವೀರಗಾಸೆ ತಂಡ, ರಾಂಪೂರದ ಚಿದಾನಂದಪ್ಪ ಅವರ ಪುರವಂತಿಕೆ ಸೇವೆ, ಹಸಮಕಲ್‌ ಅಮರೇಶ ತಂಡದ ಹಗಲು ವೇಷಗಾರರ ತಂಡ, ಮಸ್ಕಿಯ ಅಮರ ಪ್ರೇಮ ಸಂಸ್ಥೆಯ ಸಿಂಗಾರಿ ಮೇಳ, ಡೊಳ್ಳು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಅಶೋಕ ವೃತ್ತ, ಅಗಸಿ, ಮುಖ್ಯಬಜಾರ, ತೇರ ಬಜಾರ, ಕನಕವೃತ್ತದ ಮೂಲಕ ಸಾಗಿದ ಮೆರವಣಿಗೆ ಭ್ರಮರಾಂಬ ದೇವಸ್ಥಾನ ತಲುಪಿತು. ಮೆರವಣಿಗೆಯುದ್ದಕ್ಕೂ ಭಕ್ತರು ಭ್ರಮರಾಂಬದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕುಂಭ ಹೊತ್ತ ಮಹಿಳೆಯರಿಗೆ ಹಾಗೂ ಜಾನಪದ ಕಲಾ ತಂಡಗಳಿಗೆ ಗ್ರಾಮಸ್ಥರು ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ಗಂಗಾ ಸ್ಥಳದಿಂದ ಸಾವಿರಾರು ಕುಂಭಗಳಲ್ಲಿ ತರಲಾಗಿದ್ದ ಗಂಗಾ ಜಲದಿಂದ ಭ್ರಮರಾಂಬ ದೇವಿಯ ವಿಗ್ರಹಕ್ಕೆ ಅಭಿಷೇಕ ಮಾಡಲಾಯಿತು. ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. 15 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ರಾಯಚೂರು ಜಿಲ್ಲೆ ಸೇರಿದಂತೆ ಸುತ್ತಮುತ್ತ ತಾಲ್ಲೂಕುಗಳ ಭಕ್ತರು ಭಾಗವಹಿಸಿದ್ದರು.

ಉಪಾಧ್ಯಕ್ಷ ರವಿಕುಮಾರ ಪಾಟೀಲ, ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಜಿ. ಸತ್ಯನಾರಾಯಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಉಪ್ಪಾರ, ಕೆ.ವೀರನಗೌಡ, ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ಪ್ರಸನ್ನ ಪಾಟೀಲ, ಮಂಜುನಾಥ ಪಾಟೀಲ, ಡಾ. ಶಿವಶರಣಪ್ಪ ಇತ್ಲಿ, ಡಾ. ಬಿ.ಎಚ್. ದಿವಟರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT