ಪ್ರಸನ್ನ ಬಲ್ಲಾಳ್ ಕುಟುಂಬಸ್ಥರು, ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಸೇರಿ ಸಾವಿರಾರು ಜನ ಪುಷ್ಪ ನಮನ ಸಲ್ಲಿಸಿದರು.
ಚೈತನ್ಯ ಯುವ ವೃಂದದ ಎಚ್. ಜನಾರ್ದನ್, ಬಲ್ಲಾಳರ ಗುರುಗಳಾದ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ರಘುರಾಮ ಸೋಮಯಾಜಿ, ಯಳ ಗೋಳಿ ಟಿ. ಭೋಜ ಶೆಟ್ಟಿ, ಜೇಸಿಐನ ಹರಿದಾಸ ಬಿ.ಸಿ.ರಾವ್ ಶಿವಪುರ, ಹೆಬ್ರಿ ಅಜೆಕಾರು ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯಕ್, ಶಾರದೋತ್ಸವ ಸಮಿತಿಯ ಟಿ.ಜಿ. ಆಚಾರ್ಯ, ಬಲ್ಲಾಳ್ ಆಪ್ತರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಗೋಪಾಲ ಭಂಡಾರಿ ನುಡಿನಮನ ಸಲ್ಲಿಸಿದರು.