ಕರಾವಳಿ ಬದುಕು, ಬವಣೆ, ಅವರ ಸುಖ–ದುಃಖ, ಅವರ ವಿಚಾರಗಳ ಬಗ್ಗೆ ಹೇಳುವ ಸಿನಿಮಾವೊಂದು ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದೆ. ಈ ಸಿನಿಮಾ ನಿರ್ದೇಶಿಸಿರುವವರು ದೇವರಾಜ್ ಪೂಜಾರಿ. ಸಿನಿಮಾ ಚಿತ್ರೀಕರಣ ನಡೆದಿರುವುದು ಉಡುಪಿ, ಕುಂದಾಪುರದ ಕಡಲ ತೀರದ ಪ್ರದೇಶಗಳಲ್ಲಿ. ‘ಕಡಲ ತೀರದ ಕಹಾನಿ’ ಎಂಬ ಅಡಿಶೀರ್ಷಿಕೆಯನ್ನು ಈ ಸಿನಿಮಾಕ್ಕೆ ನೀಡಲಾಗಿದೆ.