‘ಜ್ಯೋತಿಷ, ವಾಸ್ತು ನಿಷೇಧ ಇಲ್ಲ?’ ವರದಿ (ಪ್ರ.ವಾ., ಸೆ. 27) ಓದಿ ಆತಂಕವಾಯಿತು. ನಿಜಕ್ಕೂ ನಿಷೇಧಗೊಳ್ಳಬೇಕಾದ್ದು ಜ್ಯೋತಿಷ ಮತ್ತು ವಾಸ್ತು ಸಂಗತಿಗಳೇ ಆಗಿವೆ. ಏಕೆಂದರೆ ಇಂದು ಟಿ.ವಿ. ವಾಹಿನಿಗಳಲ್ಲಿ ಈ ಕುರಿತು ಪ್ರಸಾರವಾಗುವ ಕಾರ್ಯಕ್ರಮಗಳು ನಮ್ಮ ಜನರ ನೆಮ್ಮದಿಯನ್ನೇ ಹಾಳು ಮಾಡಿವೆ.
ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕೂಡ ಈ ಮೂಢನಂಬಿಕೆಗಳಿಗೆ ಬಲಿಯಾಗುತ್ತಿರುವುದನ್ನು ನೋಡಿದರೆ ನಮ್ಮ ಸಮಾಜದ ಭವಿಷ್ಯದ ಬಗ್ಗೆ ಗಾಬರಿಯಾಗುತ್ತದೆ. ಜ್ಯೋತಿಷ–ವಾಸ್ತುಗಳನ್ನು ನಂಬಿ, ಹೊಸದಾಗಿ ಕಟ್ಟಿಸಿದ ಮನೆಗಳನ್ನೇ ಒಡೆದು ಸಿಮೆಂಟು ಮತ್ತು ಮರಳನ್ನು ಪೋಲು ಮಾಡಲಾಗುತ್ತಿದೆ.
ಹೀಗಾಗಿ ಸಿಮೆಂಟು ಮತ್ತು ಮರಳಿನ ಬೇಡಿಕೆ ಹೆಚ್ಚುತ್ತಿದೆ. ಇದೆಲ್ಲ ರಾಷ್ಟ್ರೀಯ ಪ್ರಾಕೃತಿಕ ಸಂಪನ್ಮೂಲದ ದುರ್ಬಳಕೆಯಲ್ಲವೇ? ಇಪ್ಪತ್ತೊಂದನೇ ಶತಮಾನದಲ್ಲೂ ನಾವು ಇಂತಹ ಮೂಢ ಮತಿಗೆ ಬಲಿಯಾಗಬೇಕೇ?