ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೇರದಾಳ, ಬಾಗಲಕೋಟೆ ಇಲ್ಲವೇ ವಿಜಯಪುರದಲ್ಲಿ ಸ್ಪರ್ಧೆ ನಡೆಸಲು ಒಮ್ಮೆ ಈ ಭಾಗದ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿತ್ತು. ಆದರೆ ಶಿಕಾರಿಪುರದಲ್ಲಿ ಎರಡು ಕಡೆ ನಡೆಸಿದ ಬೂತ್ಮಟ್ಟದ ಸಮಾವೇಶಗಳಲ್ಲಿ ಕ್ಷೇತ್ರದ ಜನ ನನ್ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ‘ಇಲ್ಲಿ ನಾಮಪತ್ರ ಸಲ್ಲಿಸಿ, ನೀವು ಬೇರೆ ಕಡೆ ಚುನಾವಣೆ ಪ್ರಚಾರಕ್ಕೆ ತೆರಳಿ. ನಿಮ್ಮನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು’ ಎಂದರು. ಶಿಕಾರಿಪುರ ಕ್ಷೇತ್ರ ಬಿಟ್ಟು ಕಳುಹಿಸಲು ಯಾರೊಬ್ಬರೂ ಸಿದ್ಧರಿಲ್ಲ. ಹಾಗಾಗಿ ಅದನ್ನು ಬಿಟ್ಟು ಬರುವುದಿಲ್ಲ’ ಎಂದರು.