ಕಡಲ್ಗಳ್ಳರು ಸಣ್ಣ ದೋಣಿ ಮತ್ತು ಏಣಿ ಬಳಸಿ ಭಾರತದ ಎಂ.ವಿ. ಜಗ್ ಅಮರ್ ಸರಕು ಸಾಗಣೆ ಹಡಗನ್ನು ಏರಿದ್ದರು. ಸಿಬ್ಬಂದಿಯನ್ನು ಬೆದರಿಸಿ ಹಡಗನ್ನು ದೋಚಲು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಭಾರತೀಯ ನೌಕಾಪಡೆಯ ಐಎನ್ಎಸ್ ತ್ರಿಶೂಲ್ ಯುದ್ಧನೌಕೆಯು ಹಡಗನ್ನು ಸಮೀಪಿಸಿತು ಎಂದು ಮೂಲಗಳು ಹೇಳಿವೆ. ನಂತರ ನೌಕಾಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 12 ಕಡಲ್ಗಳ್ಳರನ್ನು ಬಂಧಿಸಿದ್ದಾರೆ.