ಮುಂಬೈ: ಇಲ್ಲಿನ ಎಲ್ಫಿನ್ಸ್ಟನ್ ರಸ್ತೆ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರವೇ ’ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತರು' ಪ್ರಯಾಣಿಕರ ಸುರಕ್ಷೆಯ ವಿಚಾರವಾಗಿ ಏಕೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬೇಕು, ಸಾಕಷ್ಟು ಜನ ಮೃತಪಟ್ಟ ನಂತರವಷ್ಟೇ ಗಂಭೀರ ಮತ್ತು ಸೂಕ್ಷ್ಮ ವಿಷಯದ ಬಗ್ಗೆ ಏಕೆ ಎಚ್ಚರಗೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.