ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರದಾಳದಿಂದ ಸ್ಪರ್ಧಿಸುವುದಿಲ್ಲ: ಬಿಎಸ್‌ವೈ

Last Updated 7 ಅಕ್ಟೋಬರ್ 2017, 5:04 IST
ಅಕ್ಷರ ಗಾತ್ರ

ಲೋಕಾಪುರ: ‘ಮತದಾರರ, ಕಾರ್ಯಕರ್ತರ ಬಯಕೆಯಂತೆ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ ಹೊರತು ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತೇರದಾಳದಲ್ಲಿ ನೇಕರಾರ ಸಮೇವೇಶಕ್ಕೆ ತೆರಳುವ ವೇಳೆ ಲೋಕಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕಾರಿಪುರ ಜನರು ಕ್ಷೇತ್ರ ಬಿಟ್ಟುಹೋಗದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಒಪ್ಪಿಕೊಂಡಿದ್ದೇ ಆದರೆ ರಾಜಕೀಯ ಜನ್ಮ ಕೊಟ್ಟಿರುವ ಶಿಕಾರಿಪುರ ಕ್ಷೇತ್ರ ಜನರು ಇಲ್ಲಿ ನಿಮಗೇನೂ ಕಡಿಮೆಯಾಗಿದೆ ಎನ್ನುತ್ತಿದ್ದಾರೆ’ ಎಂದು ತಿಳಿಸಿದರು.

ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ  ನೇಕಾರರ ಸಂಪೂರ್ಣ ಸಾಲಮನ್ನಾ ಮಾಡಿತ್.ತು 3% ಬಡ್ಡಿ ದರದಲ್ಲಿ ಸಾಲವನ್ನು ನೀಡಿತ್ತು ಎಂದರು. ಪ್ರಮುಖರಾದ ಲೋಕಣ್ಣ ಕತ್ತಿ, ಜಾಕೀರ ಅತ್ತಾರ, ವಿರೇಶ ಪಂಚಕಟ್ಟಿಮಠ, ಸಿ.ಎ.ಪಾಟೀಲ, ಕೃಷ್ಣಾ ಸೊಕನಾದಗಿ, ಹೊಳಬಸಪ್ಪ ದಂಡಿನ, ಸಂಗಮೇಶ ಪಲ್ಲೇದ, ಸುರೇಶ ಹುಗ್ಗಿ, ಬಾಳು ಗಡದವರ, ಪ್ರಕಾಶ ಚಿತ್ತರಗಿ, ಹಣಮಂತ ಕುಡಚಿ, ವಿಠ್ಠಲ ಗಿರಿಸಾಗರ,ಗೀರಿಶ ರಕ್ಕಸಗಿ, ಅರುಣ ಮುಧೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT